Breaking News

ಸಂಚಯ ಖಾತೆ ವೈಯಕ್ತಿಕ ಅಪಘಾತ ವಿಮೆ ಯೋಜನೆ: 2 ಲಕ್ಷ ವಿಮೆ ಮೊತ್ತ

 

ಮಂಗಳೂರು: ಎಸ್‍ಸಿಡಿಸಿಸಿ ಬ್ಯಾಂಕ್‍ನಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳಲ್ಲಿವೊಂದಾದ ಸಂಚಯ ಖಾತೆ ವೈಯಕ್ತಿಕ ಅಪಘಾತ ವಿಮೆ ಯೋಜನೆ. ಈ ಯೋಜನೆ ಅಡಿಯಲ್ಲಿ ಸಂಚಯ ಖಾತೆದಾರ ಅಪಘಾತದಲ್ಲಿ ಮರಣ ಹೊಂದಿದರೆ ಖಾತೆದಾರರ ವಾರಸುದಾರರಿಗೆ  ರೂ 2 ಲಕ್ಷ ಅಪಘಾತ ವಿಮೆ ಹಣ ಸಿಗುತ್ತದೆ.

  1.  

ಇತ್ತೀಚೆಗೆ ಬ್ಯಾಂಕ್ ನ ದಾಮಸ್‍ಕಟ್ಟೆ ಶಾಖೆಯ ಸಂಚಯ ಖಾತೆದಾರರಾದ ಆಶಾ ಮೂಲ್ಯ ಅವರು ಅಪಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಹೊಂದಿರುತ್ತಾರೆ. ಎಸ್‍ಸಿಡಿಸಿಸಿ ಬ್ಯಾಂಕಿನ ವೈಯಕ್ತಿಕ ಅಪಘಾತ ವಿಮಾ ಯೋಜನೆ ಆಡಿಯಲ್ಲಿ ಮೃತರ ವಾರಸುದಾರರ ಮಗ ಪವನೀತ್ ಅವರಿಗೆ ರೂ.2 ಲಕ್ಷ ವಿಮೆ ಮೊತ್ತದ ಚೆಕ್‍ ಅನ್ನು ಬ್ಯಾಂಕ್ ಅಧ್ಯಕ್ಷ  ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಗುರುವಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್ ನಿರ್ದೇಶಕ  ಶಶಿಕುಮಾರ್ ರೈ ಬಾಲ್ಯೊಟ್ಟು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com