ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಹಾಗೂ ಅವರು ಧರ್ಮಪತ್ನಿ ಡಾ . ಸುಷ್ಮಾ ಅಕ್ಕರಾಜು ಕುಟುಂಬ ಸಮೇತರಾಗಿ ಬಂದು ವೆಂಕಟರಮಣ ದೇವಸ್ಥಾನ ಭೇಟಿ ನೀಡಿ ದರ್ಶನ ಪಡೆದರು.
ದೇವಸ್ಥಾನದ ಮುಖ್ಯ ಅರ್ಚಕ ವೇದಮೂರ್ತಿ ಚಂದ್ರಕಾಂತ್ ಭಟ್ ಹಾಗೂ ಟ್ರಸ್ಟಿ ಕಿರಣ್ ಪೈ ಅವರು ಡಾ. ವೆಂಕಟರಮಣ ಅಕ್ಕರಾಜು ಹಾಗು ಡಾ. ಸುಷ್ಮಾ ಅಕ್ಕರಾಜು ಅವರಿಗೆ ದೇವರ ಗಂಧ ಪ್ರಸಾದ ಹಾಗೂ ಶಾಲು ಹೊದಿಸಿ ಆಶೀರ್ವಾದ ನೀಡಿದರು .
ಐಸಿಎಐ ಮಾಜಿ ಅಧ್ಯಕ್ಷ ಸಿಎ ಎಸ್ ಎಸ್ ನಾಯಕ್ ಹಾಗೂ ಸಂಧ್ಯಾ ಎಸ್ ನಾಯಕ್ ಅವರು ಉಪಸ್ಥಿತರಿದ್ದು ದೇವತಾನುಗ್ರಹಕ್ಕೆ ಪಾತ್ರರಾದರು.