Breaking News

ಹಳಿಯಾಳ: ಹೆಂಡತಿ ಕೊಲೆ– ಬ್ಯಾರಲ್ ನಲ್ಲಿ ಶವ ಬಚ್ಚಿಟ್ಟಿದ್ದ ಪತಿರಾಯ

 

ಹಳಿಯಾಳ:  ಹೆಂಡತಿ ಕೊಲೆ ಮಾಡಿ ನೀರಿನ ಖಾಲಿ ಬ್ಯಾರಲ್ ನಲ್ಲಿ ಬಚ್ಚಿಟ್ಟದ ಗಂಡನನ್ನು ಹಳಿಯಾಳ ಹಾಗೂ ರಾಮನಗರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.

ತಾಲೂಕಿನ ತೆರಗಾಂವ ಗ್ರಾಮದಲ್ಲಿ ಘಟನೆ ನಡೆದಿದೆ. ತುಕಾರಾಮ ಮಡಿವಾಳ (33), ಹೆಂಡತಿ ಶಾಂತಕುಮಾರಿ ಮಡಿವಾಳ (38) ಅವರನ್ನು ಕತ್ತುಹಿಸುಕಿ ಕೊಂದು ಹಾಕಿದ ಘಟನೆ ನಡೆದಿದೆ.

ಗಂಡ ಬೇರೆ ಹೆಣ್ಣು ಮಕ್ಕಳೊಂದಿಗೆ ಮಾತನಾಡುತ್ತಾನೆ ಎಂದು ವಿನಾಕಾರಣ ಆತನ ಮೇಲೆ ಶಾಂತಕುಮಾರಿ ಸಂಶಯ ವ್ಯಕ್ತಪಡಿಸಿದಕ್ಕೆ ಇಬ್ಬರ ನಡುವೆ ವಾಗ್ವಾದ ಶುರುವಾಗಿದ್ದು, ಕೊಪಗೊಂಡ ಪತಿ ತುಕಾರಾಮ ಮಡಿವಾಳ ಹೆಂಡತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಇದನ್ನು ಮುಚ್ಚಿ ಹಾಕುವ ಉದ್ದೇಶದಿಂದ ಮೃತ ದೇಹವನ್ನು ಬ್ಯಾರಲ್ ನಲ್ಲಿ ಬಚ್ಚಿಟ್ಟಿದ್ದ.

  1.  

ಪಕ್ಕದವರು ಹಾಗೂ  ಖಾನಾಪುರ ಮೂಲದ ರಿಜ್ವಾನ್ ಕುಂಬಾರಿ ಎಂಬುವವರ ಟಾಟಾ ಏಸ್ ವಾಹನವನ್ನು ಬಾಡಿಗೆ ಪಡೆದು ಚಾಲಕ ರಿಜ್ವಾನ್ ಮತ್ತು ಅಳ್ನಾವರ ಮೂಲದ ಸಮೀರ್ ಪಂತೋಜಿ ಹಾಗೂ ತುಕಾರಾಮ ಸೇರಿ ರಾಮನಗರದ ಕಾಡಿನಲ್ಲಿ ಮೃತ ದೇಹವನ್ನು ಎಸೆಯುವ ವೇಳೆ ಹಳಿಯಾಳ ಮತ್ತು ರಾಮನಗರದ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತುಕಾರಾಮ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಶಾಂತಕುಮಾರಿ ಅವರು ಎರಡನೇ ಮದುವೆಯಾಗಿದ್ದು, ಮೊದಲ ಪತಿಗೆ ವಿಚ್ಛೇದನ ನೀಡಿದ ಬಳಿಕ ತೆರಗಾಂವ ಮೂಲದ ತುಕಾರಾಮ ಮಡಿವಾಳ  ಅವರನ್ನು ಮೂರು ವರ್ಷಗಳ ಹಿಂದೆ ವಿವಾಹ ಆಗಿದ್ದರು.  ಗಂಡಹೆಂಡತಿ ನಡುವೆ  ಆಗಾಗ್ಗೆ ಜಗಳವಾಗುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಎಸ್ಪಿ ಡಾ. ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಸಿ.ಟಿ ಜಯಕುಮಾರ, ಡಿವೈಎಸ್ಪಿ ಶಿವಾನಂದ ಕಟಗಿ ಅವರ ಮಾರ್ಗದರ್ಶನ ನೀಡಿದ್ದರು.

ಕಾರ್ಯಾಚರಣೆಯಲ್ಲಿ ಹಳಿಯಾಳ ಸಿಪಿಐ ಸುರೇಶ್ ಶಿಂಗಿ, ಪಿಎಸ್ಐ ವಿನೋದ ರೆಡ್ಡಿ, ರಾಮನಗರ ಪಿಎಸ್ಐ ಬಸವರಾಜ ಮಬನೂರು ಹಾಗೂ ಸಿಬ್ಬಂದಿ ಮಹೇಶ  ಮೇಲಗಿರಿ, ಎಂ.ಎಂ ಮುಲ್ಲಾ, ಇಸ್ಮಾಯಿಲ್ ಕೋನನಕೇರಿ,  ನಾಮದೇವ ಕಂಕಾಳಿ, ಬಸವರಾಜ ಚನ್ನಪ್ಪಗೋಳ, ರಾಚಪ್ಪ ದನಗರ, ಶ್ರೀಶೈಲ್ ಜಿಎಮ್, ಶಂಕರಲಿಂಗ ಕ್ಷತ್ರಿಯ, ಪ್ರಶಾಂತ ಮಡಿವಾಳ, ವೆಂಕಟೇಶ ಮುದನೂರ, ರಾಜು ಚಲವಾದಿ, ವಿಠ್ಠಲ ಕಂಕನವಾಡಿ, ಆದರ್ಶ ಮಾಳಗಿ, ಗಂಗಾಧರ ತಳಗಿನಮನಿ, ತೇಜಾನಂದ ಅಮ್ಮಿನಭಾವಿ, ಮಂಜುನಾಥ್ ಮುರಗೋಡಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com