Breaking News

ಅಮ್ಮ ಗದರಿಸಿ ಬುದ್ದಿ ಹೇಳಿದ್ದೆ ತಪ್ಪಾಯಿತೇ? ವಿಷ ಸೇವನೆ, ಫಲ ನೀಡದ ಚಿಕಿತ್ಸೆ

 

ಮಂಗಳೂರು: ತಾಯಿ ಕೋಪದಿಂದ ಗದರಿಸಿದ್ದಕ್ಕೆ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾಳೆ.

ಕುಂಪಲ ಆಶ್ರಯ ಕಾಲೊನಿಯಲ್ಲಿ ವಾಸವಿದ್ದ ತಮಿಳುನಾಡು ಮೂಲದ ಸೋಮನಾಥ ಮತ್ತು ಭವ್ಯಾ ದಂಪತಿ ಹಿರಿಯ ಪುತ್ರಿ ಧನ್ಯಾ (17) ಮೃತ ವಿದ್ಯಾರ್ಥಿನಿ.

  1.  

ಧನ್ಯಾ ರಾಮಕೃಷ್ಣ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಫೆ. 14 ರಂದು ಧನ್ಯಾ ತಾಯಿ ಭವ್ಯಾ ಮನೆಗೆ ತೆರಳಿದಾಗ ಮನೆಯಲ್ಲಿ ಮಗಳು ಇರಲಿಲ್ಲ. ಮಧ್ಯಾಹ್ನ 3 ಗಂಟೆಗೆ ಧನ್ಯಾ ಮನೆಗೆ ಮರಳಿದ್ದು, ಈ ವೇಳೆ ತಾಯಿ ಮಗಳನ್ನು ಪ್ರಶ್ನಿಸಿದ್ದು, ಇದಕ್ಕೆ ಧನ್ಯಾ ಗೆಳತಿ ಮ‌ನೆಗೆ ಓದಲು ಹೋಗಿದ್ದೆ ಎಂದು ಹೇಳಿದ್ದಾಳೆ. ಫೋನ್ ಯಾಕೇ ಮಾಡಲಿಲ್ಲ ತಾಯಿ ಗದರಿದ್ದಕ್ಕೆ ವಿಷ ಸೇವಿಸಿದ್ದಾಳೆ. ಮನೆಯಲ್ಲಿ ಇದ್ದ ಗೆದ್ದಲಿಗೆ ಹೊಡೆವ ಕೀಟ ನಾಶಕ ಸೇವಿಸಿದ್ದಾಳೆ. ಆಕೆಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಧನ್ಯಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾಳೆ.

ತಂದೆ ಸೋಮನಾಥ್ ಮೇಸ್ತ್ರಿ ಕೆಲಸ ಮಾಡುತ್ತಿದ್ದು, ತಾಯಿ ಭವ್ಯಾ ಉಪ್ಪಿನ ಕಾಯಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ, ಸಂಜೆ ವೇಳೆಯಲ್ಲಿ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಒಬ್ಬ ಮಗ ಕೂಡ ಇದ್ದಾನೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com