ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿ ಬೆಳ್ಳಾರೆ ಜೈಲಿನಲ್ಲಿ ಇರುವ ವ್ಯಕ್ತಿ, ಅಂತಹವನಿಗೆ ಎಸ್ ಡಿಪಿಐ ಟಿಕೆಟ್ ಕೊಟ್ಟಿದೆ. ಕ್ರಿಮಿನಲ್ ಹಿನ್ನೆಲೆ ವ್ಯಕ್ತಿಯನ್ನು ಅಭ್ಯರ್ಥಿ ಮಾಡಿರುವುದು ಸರಿಯಲ್ಲ. ಪಿಎಫ್ಐ ಸದಸ್ಯನನ್ನು ಎಸ್ ಡಿಪಿಐ ಅಭ್ಯರ್ಥಿ ಮಾಡಿರೋದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಎಸ್ ಡಿಪಿಐ, ಪಿಎಫ್ಐನ ಮತ್ತೊಂದು ಮುಖ ಎನ್ನುವುದು ಇದರಿಂದ ಸ್ಪಷ್ಟಗೊಂಡಿದೆ. ಈ ಬಗ್ಗೆ ತನಿಖೆ ಆಗಬೇಕು, ಇವರು ಅವರ ಇನ್ನೊಂದು ಮುಖವಾಗಿದೆ. ಕಾಂಗ್ರೆಸ್ ನವರು ಈ ಬಗ್ಗೆ ಏನ್ ಹೇಳ್ತಾರೆ ಎನ್ನುವುದನ್ನು ಕೇಳಬೇಕು ಎಂದು ಹೇಳಿದರು.
ನಾವು ಇದನ್ನು ಗೃಹ ಸಚಿವಾಲಯಕ್ಕೆ ಮಾಹಿತಿ ನೀಡುತ್ತೇವೆ. ಪಿಎಫ್ಐ ನಿಷೇಧಿತ ಸಂಘಟನೆಯಾಗಿದೆ. ಎಸ್ ಡಿಪಿಐ ರಾಜಕೀಯ ಸಂಘಟನೆ. ಹೀಗಿರುವಾಗ ಅವರ ಸದಸ್ಯನಿಗೆ ಇವರು ಟಿಕೆಟ್ ನೀಡುವುದು ಅಂದರೆ ಏನರ್ಥ? ಎಂದು ಪ್ರಶ್ನಿಸಿದ್ದಾರೆ.