Breaking News

ಚುನಾವಣೆಗೆ ಚಾಣುಕ್ಯ ಅಮಿತ್ ಶಾ ಪ್ಲಾನ್: ಭರ್ಜರಿ ರೋಡ್ ಶೋ

 

ಮಂಗಳೂರು: ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಉದ್ಘಾಟನೆಗೆ ಕರಾವಳಿ ಜಿಲ್ಲೆಗೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳೂರು ನಗರದಲ್ಲಿ ಭರ್ಜರಿ ರೋಡ್ಶೋ  ನಡೆಸಿದರು.

ಬಜ್ಪೆ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ಪ್ರದೇಶದಿಂದ ಕೆಂಜಾರು ಶ್ರೀದೇವಿ ಕಾಲೇಜಿನವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಅಮಿತ್ ಶಾ ಅವರನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಕಾರ್ಯಕರ್ತರು ಹರ್ಷೋದ್ಗಾರ ಕಂಡು ಬಂತು.

  1.  

ಸಚಿವ ಅಮಿತ್ ಶಾ ಅವರ ರೋಡ್ಶೋ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ಕಟೀಲು ಅವರೂ ಭಾಗಹಿಸಿ ಅಮಿತ್ ಶಾ ಅವರಿಗೆ ಸಾಥ್ ನೀಡಿದರು.

ವಿವಿಧ ಬ್ಯಾಂಡ್ಸೆಟ್, ವೈವಿಧ್ಯ ವೇಷಭೂಷಣಗಳ ಮೂಲಕ ಗೃಹ ಸಚಿವರಿಗೆ ಸ್ವಾಗತ ಕೋರಲಾಯಿತು. ಸಾಕಷ್ಟು ಜನ ನೆರೆದಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮೆರವಣಿಗೆಯಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com