ಉಡುಪಿ (ಕಾರ್ಕಳ): ಲಾರಿ ಚಾಲಕನನ್ನು ಕೊಲೆ ಮಾಡಿದ ಘಟನೆ ತಾಲೂಕಿನ ಮುಡಾರು ಗ್ರಾಮದ ಮುಡ್ರಾಲು ಸಮೀಪ ಇರುವ ಕ್ಯಾಶ್ಯೂ ಫ್ಯಾಕ್ಟರಿ ಬಳಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಮಣಿ ತಮಿಳುನಾಡು (36) ಎಂದು ಗುರುತಿಸಲಾಗಿದೆ. ಮುಡ್ರಾಲುನಲ್ಲಿ ಇರುವ ಕ್ಯಾಶ್ಯೂ ಫ್ಯಾಕ್ಟರಿಗೆ ಪ್ರತಿವರ್ಷ ತಮಿಳುನಾಡಿನಿಂದ ಗೇರು ಬೀಜ ಲೋಡ್ ಬರುತ್ತಿತ್ತು. ಲಾರಿಯಲ್ಲಿ ಅನ್ಲೋಡ್ ಮಾಡಿ ಹೋಗುತ್ತಿದ್ದರು.
ಕುತ್ತಿಗೆಗೆ ಶಾಲ್ ಬಿಗಿದು ಯಾವುದೋ ಆಯುಧದಿಂದ ಇರಿದು ಕೊಲೆ ಮಾಡಿರುವ ಗುರುತುಗಳ ಕಂಡುಬಂದಿವೆ. ಲಾರಿ ಇನ್ನೊಬ್ಬ ಚಾಲಕ ವೀರಬಾಹು ಹಾಗೂ ಮಣಿ ನಡುವೆ ಯಾವುದೋ ಕಾರಣಕ್ಕೆ ಗಲಾಟೆ ನಡೆದು ಚಾಲಕ ವೀರಬಾಹು ಮಣಿಯನ್ನು ಕೊಲೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ