ಕರಾವಳಿ ಡೈಲಿನ್ಯೂಸ್
ಮಂಗಳೂರು: ಆ್ಯಕ್ಟಿವಾ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದ ಹಾಸ್ಯ ಕಲಾವಿದ ನಟ ಅರವಿಂದ ಬೋಳಾರ್ ಅವರ ಅರೋಗ್ಯ ಸ್ಥಿತಿ ಚೇತರಿಕೆ ಕಾಣುತ್ತಿದೆ.
ಅಪಘಾತ ನೋವಿನಲ್ಲಿಯೂ ಕೂಡ ಅರವಿಂದ ಬೋಳಾರ್ ಅವರು ಜನರಿಗೆ ಅತ್ಯುತ್ತಮ ಸಂದೇಶವನ್ನು ಆಸ್ಪತ್ರೆಯಿಂದಲೇ ರವಾನೆ ಮಾಡಿದ್ದಾರೆ. ತಾನೂ ಹೆಲ್ಮೆಟ್ ಹಾಕಿದ್ದರಿಂದ ಅಪಾಯದಿಂದ ಪಾರಾದೇ, ಹೆಲ್ಮೆಟ್ ಇಲ್ಲದೇ ಇದ್ದೀದ್ದರೆ ದೊಡ್ಡ ಮಟ್ಟದ ಅಪಾಯ ಸಂಭವಿಸಿತ್ತು, ನನ್ನ ರಕ್ಷಣೆ ಮಾಡಿದ್ದು ನಾನು ಧರಿಸಿದ ಹೆಲ್ಮೆಟ್ ಎಂಬ ವಿಡಿಯೊ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ರವಾನಿಸಿದ್ದಾರೆ.
ಪಂಪ್ ವೆಲ್ ಸಮೀಪದಲ್ಲಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಅರವಿಂದ ಬೋಳಾರ್ ಅವರಿಗೆ ಸಣ್ಣ ಪ್ರಮಾಣದ ಪೆಟ್ಟು, ಗಾಯಗಳಾಗಿವೆ. ಸಣ್ಣ ಸರ್ಜರಿ ಕೂಡ ಆಗಿದೆ ಎಂದು ಹೇಳಲಾಗುತ್ತಿದೆ. ಅಪಘಾತ ನಡೆದ ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಅಭಿಮಾನಿಗಳಿಗೂ ಆತಂಕಕ್ಕೆ ಕಾರಣವಾಗಿತ್ತು.
ಇದೀಗ ಅವರು ಚೇರಿಸಿಕೊಂಡು ‘ನನಗೆ ಏನೂ ಆಗಿಲ್ಲ. ನಾನು ಆರೋಗ್ಯವಾಗಿದ್ದೇನೆ. ಹೆಲ್ಮೆಟ್ ಧರಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಅಪಾಯದಿಂದ ಪಾರಾಗಿದ್ದೇನೆ. ಇಲ್ಲದಿದ್ದಲ್ಲಿ ಸ್ವಲ್ಪ ಕಷ್ಟವಿತ್ತು. ಆದರೆ, ಸದ್ಯ ನಿಮ್ಮ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ’ ಎಂದು ತಿಳಿಸಿದ್ದಾರೆ.