ಉಡುಪಿ: ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿಉಡುಪಿ ಇದರ ಸ್ಥಾಪಕ ವಿಶ್ವಸ್ತ ಕೆ. ತೇಜಪ್ಪ ಬಂಗೇರ (84) ಮಂಗಳವಾರ ನಿಧನರಾದರು.
ಮಟ್ಟು ಅಂಬಾಡಿ ನರ್ವ ಪೂಜಾರಿ ಹಾಗೂ ಕೊರಪಳು ಪೂಜಾರ್ತಿ ದಂಪತಿ ಪುತ್ರ. ಎಸ್ಸೆಸ್ಸೆಲ್ಸಿ ನಂತರ ಮೀನುಗಾರಿಕಾ ಇಲಾಖೆಯಲ್ಲಿ ನೌಕರಿ ಪ್ರಾರಂಭಿಸಿ, ಸಬ್ ಪೋಸ್ಟ್ಮಾಸ್ಟರ್ ಆಗಿ ನಿವೃತ್ತರಾಗಿದ್ದರು.
ಆದಿ ಉಡುಪಿಯಲ್ಲಿ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸ್ಥಾಪಕ ವಿಶ್ವಸ್ತರಾಗಿದ್ದ ಇವರು ಸಂಸ್ಥೆಯ ಕಾರ್ಯದರ್ಶಿ, ಕಾರ್ಯ ನಿರ್ವಾಹಕ ವಿಶ್ವಸ್ತರಾಗಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಪೋಸ್ಟ್ಮ್ಯಾನ್ ಯೂನಿಯನ್ ಕಾರ್ಯದರ್ಶಿಯಾಗಿ, ಬಿಲ್ಲವರ ಸೇವಾ ಸಂಘ ಬನ್ನಂಜೆಯ ಕಾರ್ಯದರ್ಶಿ ಯಾಗಿ, ಆತ್ಮಾನಂದ ಸರಸ್ವತಿ ಐಟಿಐ ಬಿಲ್ಲಾಡಿ ಉಡುಪಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.