Breaking News

ಕಾಂಗ್ರೆಸ್ ಗೆ ಚುನಾವಣೆ ಬಂದಾಗ ಹಿಂದೂಗಳ ನೆನಪು: ಸಚಿವ ಕೋಟ

 

ಕಾರವಾರ: ಚುನಾವಣೆಗಳು ಹತ್ತಿರ ಬಂದಾಗ ಮಾತ್ರ ತಾವೂ ಹಿಂದೂಗಳು ಎನ್ನುತ್ತಿರುವ ಕಾಂಗ್ರೆಸ್ ನಾಯಕರು  ಹಾಗಾದರೆ ಮತಾಂತರ ನಿಷೇಧ ಕಾಯ್ದೆ ಯಾವ ಕಾರಣಕ್ಕೆ ವಿರೋಧಿಸಿದರು ಎಂಬುದನ್ನು ಬಹಿರಂಗವಾಗಿ ಸ್ಪಷ್ಟಪಡಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ತಾವೂ ಹಿಂದೂಗಳು ಎಂದು ಈಗ ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರ ಈ ಕಾಯ್ದೆ ಜಾರಿಗೆ ತಂದಾಗ ವಿರೋಧಿಸಿದ್ದವರು ಇದೇ ನಾಯಕರು’ ಎಂದು ಆಕ್ರೋಶ ಹೊರ ಹಾಕಿದರು.

  1.  

‘ಕಾಂಗ್ರೆಸ್ಸಿನ ಉಚಿತ ಭಾಗ್ಯವನ್ನು ಜನರು ನಂಬುವುದಿಲ್ಲ. ವಿರೋಧ ಪಕ್ಷಗಳು ಟೀಕಿಸುವುದು ಸಹಜ. ಆದರೆ ಸಿದ್ದರಾಮಯ್ಯ ಟೀಕೆ ಮಿತಿ ಮೀರುತ್ತಿದೆ. ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಕುಚಲಕ್ಕಿ ವಿತರಣೆಗೆ 18 ಲಕ್ಷ ಕ್ವಿಂಟಲ್ ಭತ್ತದ ಅಗತ್ಯವಿದೆ.‌ ಆದರೆ ಈವರೆಗೆ ಅಗತ್ಯ ಪ್ರಮಾಣದಷ್ಟು ಭತ್ತ ಲಭ್ಯವಾಗಿಲ್ಲ’ ಎಂದರು.

ಶಾಸಕಿ ರೂಪಾಲಿ ನಾಯ್ಕ್ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com