ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ 1 ತಾಸು ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ, ಸಂಚಾರ ಅಸ್ತವ್ಯಸ್ತವಾಯಿತು.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್, ಮತ್ತಿಕಟ್ಟೆ, ನಿಡುವಾಳೆ, ಗುತ್ತಿ, ಭೈರಾಪುರ, ಕಂದೂರು ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಳೆ ಅಬ್ಬರದ ಮಳೆ ಸುರಿದಿದೆ.
ಬೇಸಿಗೆಯಲ್ಲಿಯೇ ಮಳೆ ಕಂಡು ರೈತರು ಹಾಗೂ ಬೆಳೆಗಾರರು ಬೆಳೆ ಹಾನಿ ಆಗುವ ಆತಂಕದಲ್ಲಿ ಇದ್ದಾರೆ. ಇಳುವರಿ ಕೂಡ ಸರಿಯಾಗಿ ಸಿಗದೇ ಕಂಗಾಲಾಗಿರುವ ಬೆಳೆಗಾರರಿಗೆ ಅಕಾಲಿಕ ಮಳೆಯೂ ಪೆಟ್ಟು ನೀಡಿದೆ.