Breaking News

ಮಂಗಳವಾರದ ರಾಶಿ ಭವಿಷ್ಯ ಹೇಗಿದೇ ಎಂದು ತಿಳಿಬೇಕಾ.. ಇಲ್ಲಿದೆ ಮಾಹಿತಿ

 

horoscope ಮಿಥುನ ರಾಶಿಯ ಮಹಿಳಾ ವ್ಯಾಪಾರಿಗಳಿಗೆ ಈ ದಿನ ಶುಭ. ಕನ್ಯಾ ರಾಶಿಯವರ ಪ್ರೇಮ ಸಂಬಂಧ ಗಟ್ಟಿ ಆಗುತ್ತಾ.....

ಕಟಕ: ಉದ್ಯೋಗಾಕಾಂಕ್ಷಿಗಳಿಗೆ ಈ ದಿನ ಶುಭದಿನವಾಗಿದೆ. ಇಂದು ನಿಮಗೆ ಪ್ರತಿಷ್ಠಿತ ಕಂಪನಿಯಿಂದ ಜಾಬ್​ ಆಫರ್​ ಸಿಗಲಿದೆ. ಹಳೆಯ ಸಾಲಗಳನ್ನು ತೀರಿಸಲಿದ್ದೀರಿ. ಸಹೋದ್ಯೋಗಿಗಳ ಸಹಾಯದಿಂದ ಕೊಟ್ಟ ಕೆಲಸವನ್ನು ನಿಗದಿತ ಸಮಯಕ್ಕೆ ಮಾಡಿ ಮುಗಿಸುವಿರಿ.

ವೃಷಭ : ನಿಮ್ಮ ಈ ದಿನವು ಧನಾತ್ಮಕತೆಯಿಂದ ತುಂಬಿ ಇರಲಿದೆ. ಅನೇಕ ವಿಚಾರಗಳಲ್ಲಿ ನೀವು ತಾಳ್ಮೆ ಕಾಯ್ದುಕೊಂಡಲ್ಲಿ ಯಾವ ಸಂಕಷ್ಟವೂ ನಿಮ್ಮ ಬಳಿ ಬರೋದಿಲ್ಲ. ಮಕ್ಕಳ ಒಳಿತಿಗಾಗಿ ಪ್ರಾರ್ಥಿಸಿ.

ವೃಶ್ಚಿಕ : ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ದೊಡ್ಡ ಅನಾಹುತ ಉಂಟಾದೀತು. ಸೋಮಾರಿತನವನ್ನು ಕಡಿಮೆ ಮಾಡಿಕೊಂಡಷ್ಟೂ ನಿಮಗೆ ಒಳ್ಳೆಯದು.

ಸಿಂಹ: ಪಾಲುದಾರಿಕೆ ವ್ಯವಹಾರಗಳಲ್ಲಿ ನಷ್ಟ ಅನುಭವಿಸಲಿದ್ದೀರಿ. ಸ್ವತಂತ್ರವಾಗಿ ಏನನ್ನಾದರೂ ಮಾಡುವ ಬಗ್ಗೆ ಯೋಚನೆ ಮಾಡಿ. ಸಿಕ್ಕ ಹಣವನ್ನು ನೀರಿನಂತೆ ಪೋಲು ಮಾಡಬೇಡಿ. ಭವಿಷ್ಯದ ಬಗ್ಗೆ ಚಿಂತಿಸಿ.

ಮೇಷ : ಅನೇಕ ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗೆ ಇಂದು ಪರಿಹಾರ ಸಿಗಲಿದೆ. ಇದರಿಂದ ನೀವು ನೆಮ್ಮದಿಯಿಂದ ಇರಲು ಸಾಧ್ಯವಾಗಲಿದೆ. ಕೆಲವು ಸಮಸ್ಯೆಗಳಿಗೆ ವಿವೇಚನೆಯಿಂದ ಯೋಚನೆ ಮಾಡಿದರೆ ಪರಿಹಾರ ಸಿಗಲಿದೆ.

ಮಕರ : ಕೆಲಸವನ್ನು ಬದಲಾಯಿಸುವ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಲಿದ್ದೀರಿ. ಆದರೆ ಈ ವಿಚಾರವನ್ನು ನೀವು ಸದ್ಯಕ್ಕೆ ಮುಂದೂಡುವುದು ಉತ್ತಮ. ಮಕ್ಕಳ ಭವಿಷ್ಯದ ಬಗ್ಗೆಯೂ ಚಿಂತಿಸಲಿದ್ದೀರಿ. ಆಸ್ತಿ ಸಂಬಂಧಿ ವ್ಯವಹಾರಗಳಲ್ಲಿ ಮುನ್ನಡೆ ಕಾದಿದೆ.

ಕುಂಭ:ಸಂಗಾತಿಯ ವಿಚಾರದಲ್ಲಿ ತಪ್ಪು ಭಾವನೆಗಳು ಉಂಟಾಗಬಹುದು. ಆದಷ್ಟು ಈ ಸಂದರ್ಭದಲ್ಲಿ ನೀವು ತಾಳ್ಮೆ ಕಾಯ್ದುಕೊಳ್ಳಬೇಕು. ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಇಂದು ದಿಢೀರ್​ ಪೂರ್ಣಗೊಳ್ಳಲಿದೆ.

  1.  

ಮಿಥುನ : ಮಹಿಳಾ ವ್ಯಾಪಾರಿಗಳಿಗೆ ಈ ದಿನ ಶುಭದಿನವಾಗಿದೆ. ಬಹಳ ದಿನಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದ ನಿಮ್ಮ ವ್ಯಾಪಾರ ವ್ಯವಹಾರ ಇಂದು ಉತ್ತಮ ಫಲಿತಾಂಶ ನೀಡಲಿದೆ. ಹಣದ ಚಿಂತೆ ದೂರಾಗಲಿದೆ.

ಕನ್ಯಾ : ನಿಮ್ಮ ಪ್ರೇಮ ಸಂಬಂಧವು ಉತ್ತಮವಾಗಿ ಇರಲಿದೆ . ಪೋಷಕರಿಂದಲೂ ಇದಕ್ಕೆ ಹಸಿರು ನಿಶಾನೆ ದೊರಕುವ ದಿನ ಸಮೀಪಿಸುತ್ತಿದೆ. ಯಾವುದೇ ಸಂಬಂಧವನ್ನು ಅತಿಯಾಗಿ ಗೌರವಿಸುವ ನಿಮ್ಮ ಗುಣ ಎಲ್ಲರಿಗೂ ಇಷ್ಟವಾಗಲಿದೆ.

ಮೀನ : ವ್ಯವಹಾರಕ್ಕೆ ಸಂಬಂಧಿಸಿದಂತೆ ಇಂದು ದೂರ ಪ್ರಯಾಣ ಮಾಡಲಿದ್ದೀರಿ. ಹಿತೈಷಿಗಳ ಮಾತು ನಿಮಗೆ ಉತ್ತಮ ಮಾರ್ಗದರ್ಶನ ನೀಡಲಿದೆ. ಪ್ರಮುಖ ಸಮಸ್ಯೆಗಳು ಬಗೆಹರಿಯಲಿದೆ .

ತುಲಾ : ನಿಮ್ಮ ವೈವಾಹಿಕ ಜೀವನವು ಮಧುರವಾಗಿ ಇರಲಿದೆ. ಜೀವನ ಸಂಗಾತಿಗೆ ನೀವು ಎಲ್ಲಾ ವಿಚಾರಗಳಲ್ಲಿ ಸಂಪೂರ್ಣ ಬೆಂಬಲ ನೀಡಲಿದ್ದೀರಿ. ಕಚೇರಿ ಕೆಲಸದಲ್ಲಿ ಒತ್ತಡ ಹೆಚ್ಚಿದ್ದರೂ ನೆಮ್ಮದಿಗೇನು ಭಂಗವಿಲ್ಲ.

ಧನು : ಹೆಚ್ಚಿನ ಉದ್ಯೋಗಾವಕಾಶಗಳು ನಿಮ್ಮನ್ನು ಅರಸಿಕೊಂಡು ಬರಲಿದೆ. ಆದರೆ ಸೂಕ್ತವಾಗಿ ಯೋಚಿಸಿ ನಿಮ್ಮ ಆಯ್ಕೆ ಮಾಡಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿದೆ. ಅನಾವಶ್ಯಕ ಕಾರಣಕ್ಕೆ ಧನವ್ಯಯ ಬೇಡ.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com