ಮಂಗಳೂರು: ಕರಾವಳಿಯಲ್ಲಿ ಐತಿಹಾಸಿಕ ಕ್ಷಣ. ಈ ಕರಾವಳಿಯನ್ನು ಬಿಜೆಪಿಯ ಹಿಂಸೆಯ ಪ್ಯಾಕ್ಟರಿಯನ್ನಾಗಿ ಮಾಡಿಕೊಂಡಿದೆ. ಮೋದಿ ಹಾಗೂ ಬೊಮ್ಮಾಯಿ ಸರಕಾರವು ಸಾಮಾನ್ಯ ಜನರನ್ನು ಧಮನ ಮಾಡುತ್ತಿದೆ. ಮೋದಿ, ಬೊಮ್ಮಯಿ ಒಂದೇ ನಾಣ್ಯದ ಮುಖಗಳು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ್ ಟೀಕೆ ಮಾಡಿದರು.
ಭಾನುವಾರ ಮಂಗಳೂರು ಕರಾವಳಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಮರಾಜ್ಯದ ಕನಸನ್ಮು ಬಿಜೆಪಿ ಸರಕಾರ ಹಾಳುಮಾಡಿದೆ. ಧರ್ಮದ ಹೆಸರಲ್ಲಿ ಜನರನ್ನು ಹಾಳು ಮಾಡುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ಅಹಿಂಸೆಯೇ ಇವರ ರಾಜಕೀಯ ಬಂಡವಾಳ. ಚುನಾವಣೆ ಬಂದಾಗ ಬಿಜೆಪಿಗೆ ಜನರ ಬಗ್ಗೆ ಕಾಳಜಿ ಉಕ್ಕಿ ಬರುತ್ತದೆ ಎಂದು ಹೇಳಿದರು.
ಮೋದಿ ಅವರ ದುರಾಂಕಾರದ ಮಾತು, ಸುಳ್ಳಿನ ಕಂತೆ ಪುರಾಣಗಳಿಂದ ಜನರನ್ನು ಮರಳು ಮಾಡುವ ಕೆಲಸವೂ ಬಹಳ ದಿನ ನಡೆಯಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಾಕಷ್ಟು ಅಂತರ ಇದೆ. ಜನಪರ ಯೋಚನೆ ಕಾಂಗ್ರೆಸ್ ಬದ್ಧತೆ. ನಳಿನ್ ಕುಮಾರ್ ಅವರಿಗೆ ಲವ್ ಜಿಹಾದ್ ಬಗ್ಗೆ ಚಿಂತೆ. ಉದ್ಯೋಗ, ಬಡವರ ಹಾಗೂ ಅಭಿವೃದ್ಧಿ ಬಗ್ಗೆ ಚಿಂತೆಯೇ ಇಲ್ಲ ಎಂದು ಆರೋಪಿಸಿದರು.