Breaking News

ಬೈಕ್, ಬೊಲೆರೊ ನಡುವೆ ಭೀಕರ ರಸ್ತೆ ಅಪಘಾತ; ಯುವಕ ಸ್ಥಳದಲ್ಲಿಯೇ ಸಾವು

 

ಹೊನ್ನಾವರ:ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿತ್ತಾರ ಸಮೀಪದ ಮುಂಡಾರದಲ್ಲಿ ಬೈಕ್ ಮತ್ತು ಬುಲೆರೋ ನಡುವೆ ಅಪಘಾತ ಸಂಭವಿಸಿ ಯುವಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

  1.  

ಬೆಳಿಗ್ಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಮೂಲ ಮಾವಿನಕುರ್ವಾದ, ಹಾಲಿ ಹಡಿಕಲ್ ನಿವಾಸಿ ಸುಬ್ರಹ್ಮಣ್ಯ ರಾಮ ಗೌಡ ಮೃತ ಪಟ್ಟಿರುವ ಯುವಕ ಎಂದು ತಿಳಿದು ಬಂದಿದೆ.

ಮೃತ ಯುವಕ ಪ್ರತಿದಿನ ಹೊನ್ನಾವರಕ್ಕೆ ಕೆಲಸ ಹೋಗುತ್ತಿದ್ದ. ಮಂಗಳವಾರ ಎಂದಿನಂತೆ ಕೆಲಸಕ್ಕೆ ಹೋಗುತ್ತಿದ್ದಾಗ ಬೈಕ್ ಗೆ ಬುಲೆರೋ ಬಡಿದ ಪತಿಣಾಮ ಪತಿಣಾಮ ಬಿದ್ದಿದ್ದು, ತಲೆಗೆ ಪೆಟ್ಟು ಬಿ ಬಿದ್ದ ಸ್ಥಳದಲ್ಲಿ ರಕ್ತ ಸ್ರಾವವಾಗಿ ಮೃತಪಟ್ಟಿದ್ದಾನೆ.
ಬುಲೆರೊ ಯಾರದ್ದು ಎಂದು ಇನ್ನು ಸ್ಪಷ್ಟವಾದ ಮಾಹಿತಿ ತಿಳಿದು ಬಂದಿಲ್ಲ.
ಅಪಘಾತಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಪೊಲೀಸ್ ಮಾಹಿತಿಯಿಂದ ತಿಳಿದು ಬರಬೇಕಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com