Breaking News

ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತಾ? ಕೋಡಿಶ್ರೀ ನುಡಿದ ಭವಿಷ್ಯ ಏನು?

 

ಕರಾವಳಿ ಡೈಲಿನ್ಯೂಸ್ ಡೆಸ್ಕ್

ಹೊಸಪೇಟೆ: ಕೋಡಿಮಠದ ಶ್ರೀಗಳು ಇಲ್ಲಿನ ಬಿಜೆಪಿ ನಾಯಕಿ ರಾಣಿ ಸಂಯುಕ್ತ ಅವರ ನಿವಾಸದಲ್ಲಿ ಪಾದಪೂಜೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ನಾನು ಈ ಹಿಂದೆ ಭವಿಷ್ಯ ನುಡಿದಿದ್ದೆ. ಅದರಂತೆ ಆ ಭವಿಷ್ಯ ನಿಜವಾಗಿದೆ ಎಂದರು.

  1.  

ರಾಜ್ಯದಲ್ಲಿ ಒಂದೇ ಪಕ್ಷವು ಮಾತ್ರ ಅಧಿಕಾರವನ್ನು ಹಿಡಿಯಲಿದೆ. ದೊಡ್ಡ ತಲೆಗಳು ಉರುಳುತ್ತವೆ, ಒಲೆ ಹೊತ್ತಿ ಉರಿದರೆ ನಿಲ್ಲಬಹುದು , ಧರೆ ಹೊತ್ತಿ ಉರಿದರೆ ನಿಲ್ಲದು ಎಂದಿದ್ದಾರೆ . ಇದೇ ವರ್ಷ 2023 ಕ್ಕೆ ಜಾಗತಿಕ ಮಟ್ಟದಲ್ಲಿ ಈ ರೀತಿಯ ಸಮಸ್ಯೆ ಎದುರಾಗಲಿದೆ . ಸಾಧು ಸಂತರಿಗೆ ಸಮಸ್ಯೆ ಉಂಟಾಗಲಿದೆ . ಜಾಗತಿಕವಾಗಿ ಬಹಳ ದೊಡ್ಡ ಸಮಸ್ಯೆ ಕಾಡುತ್ತದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

2022 ಸಂವತ್ಸರದ ಪ್ರಾರಂಭದಲ್ಲಿಯೇ ನಾನು ಭವಿಷ್ಯ ಹೇಳಿದ್ದೆ . ಮಳೆ , ಸಿಡಿಲು , ಬೆಂಕಿ ಕಾಟ , ಮತಾಂಧತೆ ಹೆಚ್ಚುತ್ತೆ , ಸಾವು – ನೋವು ಆಗುತ್ತೆ ಅಂತಾ ಹೇಳಿದ್ದೆ. ಜನ ಅಶಾಂತಿಯಿಂದ ಇರುತ್ತಾರೆ . ಭೂಮಿ ಕುಸಿಯುತ್ತೆ ಎಂದು ಹೇಳಿದ್ದೆ . ಈಗ ನಾವು ಹೇಳಿದಂತೆಯೇ ಆಗಿದೆ ಎಂದು ಸ್ವಾಮೀಜಿ ತಿಳಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com