Breaking News

ರಾಹುಲ್ ಗಾಂಧಿ ಪಿಎ ಹೆಸರಲ್ಲಿ ನಕಲಿ ಕರೆ: ಖಾದರ್ ದೂರು ದಾಖಲು

 

ಮಂಗಳೂರು: ಶಾಸಕ ಯು.ಟಿ ಖಾದರ್​ಗೆ ಅವರಿಗೆ ಸಂಸದ ರಾಹುಲ್​ ಗಾಂಧಿ ಆಪ್ತ ಸಹಾಯಕ ಎಂದು ಹೇಳಿ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿರುವ ಬಗ್ಗೆ  ಮಂಗಳೂರು ಸೈಬರ್​ ಠಾಣೆಗೆ ಹಾಗೂ ಪೊಲೀಸ್ ಕಮಿಷನರ್ ಅವರಿಗೆ ಶಾಸಕ ಯು.ಟಿ. ಖಾದರ್ ಅವರು ದೂರು ನೀಡಿದ್ದಾರೆ.

  1.  

ಸೋಮವಾರ ಸುಮಾರು 1.30 ಕ್ಕೆ ಈ ಕರೆ ಬಂದಿದ್ದು, ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರಿಂದ ಶಾಸಕ ಖಾದರ್ ಅವರು ಕರೆ ಸ್ವೀಕರಿಸಲು ಆಗಿರಲಿಲ್ಲ. ಕರೆ ಸ್ವೀಕರಿಸಿದೆ ಇದ್ದಾಗ ನಾನು ಕಾನಿಷ್ಕ ಸಿಂಗ್​, ರಾಹುಲ್​ ಗಾಂಧಿ ಅವರ ಆಪ್ತ ಸಹಾಯಕ ಕರೆ ಮಾಡಿ ಎಂದು ಸಂದೇಶ ಕಳಿಸಿದ್ದಾರೆ. ನಂತರ ಟ್ರೂ ಕಾಲರ್​ನಲ್ಲಿ ಪರಿಶೀಲನೆ ಮಾಡಿದಾಗ ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೆಸರು ದಾಖಲಾಗಿದ್ದು ಗೊತ್ತಾಗಿದೆ.

ಅನುಮಾನದಿಂದ ಶಾಸಕ ಯು.ಟಿ ಖಾದರ್​ ಅವರು ಸಂಬಂಧ ಪರಿಶೀಲನೆ ನಡೆಸಿದಾಗ ಇದೊಂದು ನಕಲಿ ಕಾಲ್​ ಎಂಬುದು ಗೊತ್ತಾಗಿದೆ. ಕೂಡಲೇ  ಈ ರೀತಿಯ ಕಿಡಿಗೇಡಿ ಕೃತ್ಯ ಎಸಗಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಗಳೂರು ಸೈಬರ್​​ ಠಾಣೆ ಹಾಗೂ ಮಂಗಳೂರು ನಗರ ಪೊಲೀಸ್​ ಕಮಿಷನರ್​ಗೆ ದೂರು ನೀಡಿದ್ದಾರೆ.

ಸೈಬರ್​ ಕ್ರೈಂ ಠಾಣೆ ಪೊಲೀಸರು ಈ ಸಂಬಂಧ ದೂರನ್ನು ಸ್ವೀಕರಿಸಿದ್ದು, ಕರೆ ಮಾಡಿದ ವ್ಯಕ್ತಿಯ ಪತ್ತೆ ಕಾರ್ಯ ನಡೆಸಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com