Breaking News

ಕುಕ್ಕರ್ ಸ್ಫೋಟ: ಹಿರಿಯ ಪೊಲೀಸ್ ಅಧಿಕಾರಿ ಗುರಿ ಮಾಡ್ತಾ ಕಾಂಗ್ರೆಸ್, ಸಚಿವರು ಏನಂದ್ರೂ

 

ಬೆಳಗಾವಿ: ರಾಜ್ಯ ಪೊಲೀಸರು, ರಾಷ್ಟ್ರದಲ್ಲಿಯೇ ಅತ್ಯಂತ ದಕ್ಷತೆ ಹಾಗೂ ಶಿಸ್ತಿನ ಪೊಲೀಸ್ ಎಂಬ ಹೆಗ್ಗಳಿಕೆ ಹೊಂದಿದ್ದು, ಅವರ ಮನೋಸ್ಥೈರ್ಯ ಕುಗ್ಗಿಸುವ ಯಾವುದೇ ಪ್ರಯತ್ನವನ್ನು ಖಂಡಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ಹೊರಹಾಕಿದರು.

ಅವರು ಮಂಗಳವಾರ ವಿಧಾನ ಸಭೆಯಲ್ಲಿ ನಡೆದ  ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ,  ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಮಾಡುತ್ತಿದ್ದಾರೆ. ಪೊಲೀಸರ ನಿಷ್ಠೆಯನ್ನು ಪ್ರಶ್ನೆ ಮಾಡಿದ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಅವರ ನಡವಳಿಕೆ ಖಂಡನೀಯ ಎಂದರು.

  1.  

ಮಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಹಿಂದೆ ಬಾರಿ ಸಂಚು ಇದ್ದು, ಎನ್ಐಎ ಸಂಸ್ಥೆ ತನಿಖೆ ಕೈಗೊಂಡಿದೆ, ಅದೃಷ್ಟವಶಾತ್  ಅನಾಹುತವೊಂದು ತಪ್ಪಿ ಹೋಗಿದೆ. ಆದರೆ ಘಟನೆ ಸಂಬಂಧ, ಕಾಂಗ್ರೆಸ್ ನಾಯಕರು, ಹಿರಿಯ ಪೊಲೀಸ್ ಅಧಿಕಾರಿಯನ್ನು ಗುರಿಯಾಗಿಸಿ, ಟೀಕೆ ಮಾಡಿರುವುದು, ಶೋಭೆ ತರುವ ವಿಷಯವಲ್ಲ. ಭಯೋತ್ಪಾದನೆ ಸಂಚಿನ ವಿರುದ್ಧ ಪಕ್ಷ ಭೇಧ ಮರೆತು, ಸ್ಪಷ್ಟ ಸಂದೇಶ ರವಾನಿಸ ಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಕುಕ್ಕರ್ ಬಾಂಬರ್ ಬದುಕಿ ಉಳಿಯದಿದ್ದಲ್ಲಿ, ಸ್ಫೋಟ ಕೃತ್ಯದ ರೂವಾರಿಗಳು ಯಾರು ಎನ್ನುವ ಪ್ರಶ್ನೆ ಹಾಗೂ ಅನುಮಾನಗಳು ಬೇರೆ ಕೋಮುಗಳ ಮೇಲೆ ಉಳಿದು ಹೋಗುತ್ತಿದ್ದವು ಎಂದು ಸಚಿವ ಆರಗ ಹೇಳಿದರು.

ಪ್ರಸ್ತುತ ಸ್ಫೋಟದಲ್ಲಿ ಗಾಯಗೊಂಡಿರುವ, ಕುಕ್ಕರ್ ಬಾಂಬರ್, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ತನಿಖೆ ನಡೆಸುತ್ತಿರುವ ಪೊಲೀಸರು, ಮಹತ್ವದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎಂದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com