Breaking News

ಕಾರ್ಕಳ: ಖತರ್ನಾಕ್ ಜೋಡಿ ಜೈಲಿಗೆ– ಚಿನ್ನಾಭರಣ ವಶ

 

ಕಾರ್ಕಳ: ಕಲ್ಯಾ ಗ್ರಾಮದ ಉಷಾ ಜಗದೀಶ್‌ ಅಂಚನ್ ಎಂಬವರ ಮನೆಯ ಬಾಗಿಲು ಮುರಿದು 9.75 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ಬಂಧನ ಮಾಡಿದ್ದಾರೆ.

  1.  

ಬಂಟ್ವಾಳದ ಕಾಂತರಬೆಟ್ಟು‌ ನಿವಾಸಿ 34 ವರ್ಷದ ಪ್ರಸಾದ್ ಯಾನೆ ಪಚ್ಚು ಹಾಗೂ ಕಾರ್ಕಳ ಕಲ್ಯಾ ಗ್ರಾಮದ ನಿವಾಸಿ 39ವರ್ಷದ ಶಿಬಾ ಬಂಧಿತ ಆರೋಪಿಗಳು. ಆರೋಪಿ ಪ್ರಸಾದ್ ಎಂಬಾತನು ಎರಡನೇ ಆರೋಪಿ ಶಿಬಾ ಎಂಬಾಕೆ ನೀಡಿದ ಮಾಹಿತಿಯಂತೆ ಡಿ.3 ರಂದು‌ ರಾತ್ರಿ ಕಲ್ಯಾ ಗ್ರಾಮದ ಉಷಾ ಜಗದೀಶ್‌ ಅಂಚನ್ ಎಂಬುವವರ ಮನೆಯ ಬಾಗಿಲು ಮುರಿದು 9.75 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗೆ ಇಳಿದ ಪೊಲೀಸರು ಬುಧವಾರ  ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 9.75 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com