ಪುತ್ತೂರು: ಹಸು ಮತ್ತು ಕರುವನ್ನು ಪಿಕಪ್ ವಾಹನವೊಂದರಲ್ಲಿ ಪೆರ್ಲಕ್ಕೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವಾಹನ ಮತ್ತು ಅದರಲ್ಲಿದ್ದ ಹಸು, ಕರು ಸಮೇತ ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ.
ಆರೋಪಿಗಳನ್ನು ಜಗನ್ನಾಥ, ಪಿಕಪ್ ಚಾಲಕ ಗೌರಿಶಂಕರ್ ಎಂದು ಗುರುತಿಸಲಾಗಿದೆ. ಇವರು ಪೆರ್ಲ ಕಡೆ ಪಿಕಪ್ ವಾಹನದಲ್ಲಿ ಹಸು ಮತ್ತು ಕರುವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕುರಿತು ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಲಾಗಿತ್ತು.