ಮಂಗಳೂರು: ಸಿಟಿಜೆನ್ಸ್ ಕೌನ್ಸಿಲ್, ಮಂಗಳೂರು ಚಾಪ್ಟರ್ ವತಿಯಿಂದ ಚಂದ್ರಶೇಖರ ಭಂಡಾರಿ ಅವರು ಕನ್ನಡಕ್ಕೆ ಅನುವಾದಿಸಿರುವ “ರಾಷ್ಟ್ರತಪಸ್ವಿ ಶ್ರೀಗುರೂಜಿ” ಗ್ರಂಥ ಬಿಡುಗಡೆ ಸಮಾರಂಭವು, ಇದೇ 20 ರಂದು ಮಂಗಳವಾರ ಸಂಜೆ 6 ಗಂಟೆಗೆ, ಸಂಘನಿಕೇತನ ಪ್ರತಾಪನಗರ, ಮಣ್ಣಗುಡ್ಡ, ಮಂಗಳೂರಿನಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ಅವರು ಗ್ರಂಥ ಬಿಡುಗಡೆ ನೆರವೇರಿಸಲಿದ್ದಾರೆ. ಮಂಗಳೂರು ವಿವಿ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮತ್ತು ನಿರ್ದೇಶಕರು ಪ್ರಸಾರಂಗದ ಪ್ರೊ. ಸೋಮಣ್ಣ ಹೊಂಗಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು. ರಾಮಣ್ಣ ಅವರು ಗ್ರಂಥ ಪರಿಚಯವನ್ನು ನಡೆಸಿಕೊಡಲಿದ್ದಾರೆ ಎಂದು ಸಿಟಿಝೆನ್ ಕೌನ್ಸಿಲ್ ಅಧ್ಯಕ್ಷ ಪ್ರೊ. ಡಾ. ಧನೇಶ ಕುಮಾರ್ ಕೆ.ಯು ತಿಳಿಸಿದ್ದಾರೆ.